Saturday, October 30, 2021

ಪುನೀತ್ ಎನ್ನುವ ರಾಜಕುಮಾರ

 


ಸಾಯುವ ವಯಸ್ಸಾ ಇದು ?


ಪುನಿತ್ ರಾಜಕುಮಾರ್  ಹೆಸರಿಗೆ ತಕ್ಕಂತೆ, ಆಧುನಿಕ‌ ಪ್ರಜಾಪ್ರಭುತ್ವದಲ್ಲಿ ರಾಜಕುವರನೇ ಸರಿ.‌.. 

ಸಿರಿ ಸಂಪತ್ತು  ಕಾಲುಮುರಿದು ಬಿದ್ದಿತ್ತು... ಅಷ್ಟ ಐಶ್ವರ್ಯವಿತ್ತು.

ಕೋಟಿ ಕೋಟಿ  ಜನಮಾನಸದಲ್ಲಿದ್ದರು..

ಬಹುದೊಡ್ಡ ಸೆಲೆಬ್ರಟಿಯಾಗಿದ್ದರು..

ಹಲವು ಕ್ಷೇತ್ರಗಳಲ್ಲಿ ಸಾಧಿಸಿದ್ದರು..

ಚಲನಚಿತ್ರೋದ್ಯಮದ ದೃವತಾರೆಯಾಗಿ ಮೆರೆದರು.. 

ಅಪಾರ ಬಂಧು ಬಳಗ ವಿತ್ತು.

ಆದರೆ..

ಜಿಮ್ಮು ವ್ಯಾಯಾವ ವಾಕಿಂಗ್ ವರ್ಕೌಟ್ ಕೈಹಿಡಿಲಿಲ್ಲ..

ಪೌಷ್ಠಿಕ ಆಹಾರ ಸೇವನೆ ಆಯಸ್ಸು ಹೆಚ್ಚಿಸಲಿಲ್ಲ.

ಸಾವಿರಾರು ಜನ ಆಳು ಕಾಳುಗಳಿದ್ದರೂ ಪ್ರಯೋಜನವಾಗಲಿಲ್ಲ.. 

ಜಪ ತಪ ಅರ್ಚನೆ ದೇವಸ್ಥಾನ ಸುತ್ತಿದರೂ ಸಾವು ದೂರ ಸರಿಯಲಿಲ್ಲ..

ವಿನಯ ಸದ್ಗುಣ ದಾನ ಧರ್ಮ ವಿದ್ದರೂ ಅಮರನಾಗಲಿಲ್ಲ..

ಗುರು ಹಿರಿಯರು ಬಂಧು ಬಳಗದ ಹಾರೈಕೆ ಕೃಪೆ ಇದ್ದರೂ ಬದುಕಲಿಲ್ಲ.

ಜ್ಯೋತಿಷ್ಯಗಳ ಜಾತಕ ಕೆಲಸ ಮಾಡಲಿಲ್ಲ..

ಅಪ್ಪು ಗೆ..

ನಿತ್ಯವೂ ಆರೋಗ್ಯಕ್ಕಾಗಿ,  ಲಕ್ಷ ಲಕ್ಷ ಕರ್ಚು ಮಾಡುವ ಶಕ್ತಿ ಇತ್ತು.. ಕನಸಿನಲ್ಲಿ ಕಂಡದ್ದು ಮನಸ್ಸಿನಲ್ಲಿ ಮೂಡಿದ್ದು.. ಕ್ಷಣದಲ್ಲೇ ಕಣ್ಣ ಮುಂದೆ ತರುವ ಎಲ್ಲ ಶಕ್ತಿ ಇತ್ತು..


ಉತ್ತಮ ಆರೋಗ್ಯಕ್ಕಾಗಿ  ಅಗತ್ಯ ಆಧುನಿಕ  ವೈದ್ಯಕೀಯ ವ್ಯವಸ್ಥೆಯೇ ಇವರ ಕಾಲ ಬುಡದಲ್ಲಿತ್ತು..

ಎಲ್ಲವೂ ಎಲ್ಲರೀತಿಯಿಂದಲೂ ಸುವ್ಯವಸ್ಥಿತವಾಗಿ ಸುಬಧ್ರವಾಗಿತ್ತು.. 

ಆದರೂ .. 

ಸದೃಢ ದೇಹ ಆರೋಗ್ಯ ವಿದ್ದರೂ.. ತೃಪ್ತಿಕರ ಆಯಸ್ಸು  ಕಳೆಯಲು ಅಪ್ಪುಗೆ  ಆಗಲಿಲ್ಲ..  ಕೇವಲ 46 ವರ್ಷಗಳಲ್ಲೇ  ಸಾವು ಕಂಡಿದ್ದು ತೀರಾ  ಅಸಹಜ ..

ಆರೋಗ್ಯ ಆಯಸ್ಸಿನ ದೃಷ್ಟಿಕೋನದಲ್ಲಿ ಈ ಬದುಕಿನ ಕೆಲವೊಂದು ಆಕಸ್ಮಿಕ ಘಟನೆಗಳನ್ನು ಸಾರ್ವತ್ರಿಕರಣ ಮಾಡಲು ಸಾಧ್ಯವಿಲ್ಲ. ಸಾರ್ವತ್ರಿಕರಣ ಮಾಡಿದ ಘಟನೆಗಳನ್ನು ವೈಯಕ್ತಿಕರಣ ಮಾಡಲೂ ಅಸಾಧ್ಯ.   ನಿತ್ಯ ಕಲುಸಿತ ನೀರು ಕುಡಿದೇ ನೂರುವರ್ಷ ಬದುಕುವರನ್ನು ನೋಡಿದ್ದೇವೆ.  ಅಳತೆಬದ್ದವಾಗಿ ಪೌಷ್ಟಿಕ ಮೃಷ್ಟಾನ್ನ ತಿಂದರೂ ಅಸಹಜ ಸಾವು ಕಂಡವರನ್ನು ಕಂಡಿದ್ದೇವೆ.

ಈ ಬದುಕೇ ಹೀಗೆ.. 

ಯಾರಿಗೆ ..

ಎಲ್ಲಿ ಯಾವಾಗ ಹೇಗೆ ಏನು ಸಂಭವಿಸುತ್ತದೆ  ಎಂದು ಯಾರಿಂದಲೂ ಖಚಿತವಾಗಿ ಕರಾರುವಕ್ಕಾಗಿ  ಹೇಳಲು ಸಾಧ್ಯವಿಲ್ಲ.

ಸಾವಿನ ಮುಂದೆ ಎಲ್ಲವೂ  ಶೂನ್ಯ 

ಬಾರದು ಬಪ್ಪದು  ಸನಿಹ ಬಂದರೆ ತಪ್ಪದು.

ಈ ಕ್ಷಣ ಸಹಜವಾಗಿದ್ದ ವ್ಯಕ್ತಿ  ಕ್ಷಾಣಾರ್ಧದಲ್ಲಿ ಶವವಾಗಿ  ಮಲಗುವದು  ಎಂದರೆ .. ? ಅರಗಿಸಿಕೊಳ್ಳುವದು ಹೇಗೆ?

ಈ ಮೂರುದಿನದ ಬಾಳ ಸಂತೆಯಲಿ ಬದುಕಿನ ಬಹುದೊಡ್ಡ ಸತ್ಯ ಸಂದೇಶವಿದು ..

ಸಾವಿಗೆ ಜಾತಿ ಕುಲ ಸಿರಿ ಸಂಪತ್ತು ಸ್ತ್ರೀ ಪುರುಷ  ಬಣ್ಣ ಪ್ರದೇಶ ಮಗು ವೃದ್ದ ಮುಪ್ಪು ಯವ್ವನ ಬಾಲ್ಯ. ಯಾವುದರ ಹಂಗು ಪರಿವು ಲವಲೇಶವೂ ಇಲ್ಲ..

ಪಡದಷ್ಟೇ ಈ ಆಯಸ್ಸು 

ಈ ಜೀವ ಜೀವನ‌ ಕ್ಷಣಿಕ ..



ಪುನೀತ್ ರಾಜ್ ಕುಮಾರ್ ಜೀವನ ಯಾತ್ರೆ


ಪುನೀತ್ ರಾಜ್‍ಕುಮಾರ್ ಅವರು, 17 ಮಾರ್ಚ್ 1975ರಂದು ಜನಿಸಿದ್ದರು. ನಟ, ಹಿನ್ನೆಲೆ ಗಾಯಕ ಮತ್ತು ದೂರದರ್ಶನ ನಿರೂಪಕರಾಗಿ ತೊಡಗಿಸಿಕೊಂಡಿದ್ದರು. ಬಾಲ್ಯದಿಂದಲೂ ಕನ್ನಡ ಚಿತ್ರರಂಗದಲ್ಲಿ ತಂದೆ ದಿವಂಗತ ಡಾ.ರಾಜ್ ಕುಮಾರ್ ಜೊತೆಗೆ ನಟರಾಗಿ ತೊಡಗಿಸಿಕೊಂಡಿದ್ದ ಅವರು, ಕನ್ನಡ ಸಿನಿಮಾ ರಂಗದಲ್ಲಿ ಕೆಲಸ ಮಾಡುತ್ತಾರೆ.


ಪುನೀತ್ 26 ಚಲನಚಿತ್ರಗಳಲ್ಲಿ ನಾಯಕ ನಟನಾಗಿ ನಟನೆ ಮಾಡಿದ್ದಾರೆ. ಬಾಲ್ಯದಲ್ಲಿ ತನ್ನ ತಂದೆ ರಾಜಕುಮಾರ್ ಅಭಿನಯದ ಚಿತ್ರಗಳಲ್ಲಿ ಬಾಲ್ಯ ನಟನಾಗಿ ವಸಂತ ಗೀತ (1980), ಭಾಗ್ಯದಾತ (1981), ಚಲಿಸುವ ಮೋಡಗಳು (1982), ಎರಡು ನಕ್ಷತ್ರಗಳು (1983) ಮತ್ತು ಬೆಟ್ಟದ ಹೂವು (1985) ಅವರು ನಟಿಸಿದ ಚಿತ್ರಗಳ ನಟನೆಗೆ ಮೆಚ್ಚುಗೆ ಪಡೆದರು.


ಅವರ ಬೆಟ್ಟದ ಹೂವು ಚಿತ್ರದ ರಾಮು ಪಾತ್ರದ ಬಾಲನಟನೆಗೆ ರಾಷ್ಟ್ರ ಚಲನಚಿತ್ರ ಪ್ರಶಸ್ತಿಗೆ ಪಾತ್ರರಾದರು. ಪುನೀತ್ ಮೊದಲ ಪ್ರಮುಖ ಪಾತ್ರದಲ್ಲಿ 2002′ ಅಪ್ಪು ಚಿತ್ರದಲ್ಲಿ ಅಭಿನಯಿಸಿದರು. ಅವರ ಅಭಿ (2003), ಆಕಾಶ್ (2005), ಅರಸು (2007), ಮಿಲನ (2007), ಜಾಕೀ (2010), ಹುಡುಗರು (2011), ಅಣ್ಣಾ ಬಾಂಡ್ (2012) ಮತ್ತು ಪವರ್ (2014) ಸೇರಿದಂತೆ ಇತರ ಯಶಸ್ವಿ ಚಲನಚಿತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅವರು ಪ್ರಸಿದ್ಧ ಟಿವಿ ಪ್ರದರ್ಶನ ಕನ್ನಡದ ಕೋಟ್ಯಧಿಪತಿ, ಹೂ ವಾಂಟ್ಸ್ ಟು ಬಿ ಮಿಲಿಯನೇರ್ ಎಂಬ ಕನ್ನಡ ಆವೃತ್ತಿಯ ಟೆಲಿವಿಷನ್ ಶೋ ನಿರೂಪಣೆ ಮಾಡಿದ್ದಾರೆ.


ವೈಯಕ್ತಿಕ ಜೀವನ


ಪುನೀತ್, ರಾಜಕುಮಾರ್ ಮತ್ತು ಪಾರ್ವತಮ್ಮ ರಾಜಕುಮಾರ್ ಮಗನಾಗಿ 17 ಮಾರ್ಚ್ 1975ರಂದು ಜನಿಸಿದರು. ಇವರು ರಾಜಕುಮಾರ್ ದಂಪತಿಯ ಕಿರಿಯ ಮಗ. ನಟರಾದ ಶಿವರಾಜಕುಮಾರ್ ಮತ್ತು ರಾಘವೇಂದ್ರ ರಾಜಕುಮಾರ್ ಸಹೋದರರು. ಪುನೀತ್ ಆರು ವರ್ಷದವರಿದ್ದಾಗ, ಅವರ ಕುಟುಂಬ ಬೆಂಗಳೂರಿಗೆ ತೆರಳಿತು. ಅವರು ಹತ್ತು ವರ್ಷ ವಯಸ್ಸಿನ ತನಕ ಅವರ ತಂದೆ ಅವರನ್ನು ಮತ್ತು ಅವರ ಸಹೋದರಿ ಪೂರ್ಣಿಮಾರನ್ನು ಚಲನಚಿತ್ರದ ಸೆಟ್ ಗೆ ಕರೆದುಕೊಂಡು ಹೋಗುತ್ತಿದ್ದರು. ಪುನೀತ್ ಡಿಸೆಂಬರ್ 1 ,1999 ರಂದು ಅಶ್ವಿನಿ ರೇವಂತ್ ರನ್ನು ವಿವಾಹವಾದರು. ಇವರಿಗೆ ಇಬ್ಬರು ಪುತ್ರಿಯರಿದ್ದಾರೆ. ದ್ರಿತಿ ಮತ್ತು ವಂದಿತಾ. ಇವರ ಮೊದಲ ಹೆಸರು ಮಾ.ಲೋಹಿತ್ ಆಗಿತ್ತು.


ಅಭಿನಯಿಸಿದ ಚಲನಚಿತ್ರಗಳು


ಬಾಲ ನಟನಾಗಿ ಅಭಿನಯಿಸಿದಂತ ಚಿತ್ರಗಳು


ಪ್ರೇಮದ ಕಾಣಿಕೆ


ಭಾಗ್ಯವಂತ


ಎರಡು ನಕ್ಷತ್ರಗಳು


ಬೆಟ್ಟದ ಹೂವು


ಚಲಿಸುವ ಮೋಡಗಳು


ಶಿವ ಮೆಚ್ಚಿದ ಕಣ್ಣಪ್ಪ


ಪರಶುರಾಮ್


ಯಾರಿವನು


ಭಕ್ತ ಪ್ರಹ್ಲಾದ


ವಸಂತ ಗೀತ


ನಟರಾಗಿ ಅಭಿನಯಿಸಿದಂತ ಚಿತ್ರಗಳು


ಅಪ್ಪು


ಅಭಿ


ವೀರ ಕನ್ನಡಿಗ


ಮೌರ್ಯ


ಆಕಾಶ್


ನಮ್ಮ ಬಸವ


ಅಜಯ್


ಅರಸು


ಮಿಲನ


ಬಿಂದಾಸ್


ವಂಶಿ


ರಾಜ್ ದ ಶೋಮ್ಯಾನ್


ಪೃಥ್ವಿ


ರಾಮ್


ಜಾಕಿ


ಹುಡುಗರು


ಪರಮಾತ್ಮ


ಅಣ್ಣ ಬಾಂಡ್


ಯಾರೇ ಕೂಗಾಡಲಿ


ನಿನ್ನಿಂದಲೇ


ಮೈತ್ರಿ


ಪವರ್ ಸ್ಟಾರ್


ಧೀರ ರಣಧೀರ


ಚಕ್ರವ್ಯೂಹ


ದೊ‍ಡ್ಮನೆ ಹುಡುಗ


ರಾಜಕುಮಾರ


ಅಂಜನಿ ಪುತ್ರ


ನಟಸಾರ್ವಭೌಮ


ಯುವರತ್ನ

ಸೇರಿದಂತೆ ಇನ್ನೂ ಅನೇಕ ಚಿತ್ರಗಳಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಹೀಗೆ ಬಹುಮುಖ ಪ್ರತಿಭೆಯ ಮೂಲಕ, ಬಾಲನಟನಾಗಿ, ನಟನಾಗಿ, ನಿರ್ಮಾಪಕನಾಗಿ ತೊಡಗಿಸಿಕೊಂಡಿದ್ದಂತ ಕನ್ನಡದ ದೊಡ್ಮನೆಯ ಕೊಂಡಿಯೊಂದು, ಇಂದು ಇನ್ನಿಲ್ಲವಾಗಿದೆ. ಈ ಮೂಲಕ ನಟ ಪುನೀತ್ ರಾಜ್ ಕುಮಾರ್ ಬಾರದ ಲೋಕಕ್ಕೆ ತೆರಳಿದ್ದಾರೆ.

No comments:

Post a Comment

ಕಥೆಗಳು

                                    ಮುಂಡಿಗೆಗಳು                                     'ಮುಂಡಿಗೆಗಳು' ಹರಿದಾಸ ಸಾಹಿತ್ಯದಲ್ಲಿ ಬರುವ  ಒಂದು ಪ್ರಾ...